Advertisement

ಉಡುಪಿ | ಏನು ಅಭಿವೃದ್ಧಿ ಮಾಡದೇ ಇದ್ದರೂ ಉಡುಪಿ ಶಾಸಕರಿಗೆ ಸಾಧನ ಪ್ರಶಸ್ತಿ !

ಸರ್ವತೋಮುಖ ಅಭಿವೃದ್ಧಿ ಮಾಡಿದೆ ಎಂದು ಪ್ರಶಸ್ತಿ ಕೊಡುವ ನಮ್ಮ ನೆಚ್ಚಿನ ನಾಯಕರು ರಾಜೇಂದ್ರ ಕುಮಾರ್ ಅವರು ಪ್ರಶಸ್ತಿ ಪ್ರಧಾನ ಮಾಡುವಾಗ ಇನ್ನು ಮುಂದೆ ನಿಮ್ಮ ಅಧ್ಯಕ್ಷತೆ ಇರುವ, ಸೊಸೈಟಿ ಗಳಲ್ಲಿ ಬಡವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಿ ಎಂದು ಪ್ರಶಸ್ತಿ ಪ್ರಧಾನ ಮಾಡಬೇಕಾಗಿತ್ತು. ಸಾರ್ವಜನಿಕ ವ್ಯವಸ್ಥೆ ಅಲ್ಲಿ ಜನಪ್ರತಿನಿದಿನಗಳು ಹೇಗೆ ಇರಬೇಕು ಎಂದು ಸಾಮಾನ್ಯ ಮನೋಜ್ಞಾನ ಇಲ್ಲದವರಿಗೆಲ್ಲ, ಪ್ರಶಸ್ತಿ ಕೊಟ್ಟರೆ ಪ್ರಶಸ್ತಿಯ ಗೌರವಕ್ಕೆ ದಕ್ಕೆ ತಂದ ಹಾಗೆ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನೂರಾರು ಜನರಿಗೆ ಒಂದು ಪೈಸೆಯೂ ಹಣ ಕೊಡದೆ ಮೋಸ ಮಾಡಿರುವುದೇ ಉಡುಪಿ ಶಾಸಕರ ಸಾಧನೆ, ಫೆಡರೇಷನ್ ನಲ್ಲಿ ಒಂದು ಪರ್ಮಿಟ್ ಗೆ ಒಂದು ತಿಂಗಳಿಗೆ 9000 ಸಾವಿರ ಲೀಟರ್ ಡೀಸೆಲ್ ಇದು ಸರ್ಕಾರದ ಅನುಮೋದನೆ, ಆದರೆ ಫೆಡರೇಷನ್ ಅಧ್ಯಕ್ಷರು,ಉಡುಪಿ ಶಾಸಕರು ನೂರಾರು ಪರ್ಮಿಟ್ ಬೋಟು ಗಳಿಗೆ 50 ಸಾವಿರ ಲೀಟರ್ ಗೂ ಹೆಚ್ಚು ಡಿಸೇಲ್ (ಡೀಲ್)ಮಾಡಿರುವುದು ಉಡುಪಿ ಶಾಸಕರ ಸಾಧನೆ. ರಾಜೇಂದ್ರ ಕುಮಾರ್ ಅವರಂತ ಸಾಧಕರು ಪ್ರಶಸ್ತಿ ಪ್ರಧಾನ ಮಾಡುವಾಗ ಅವರ ಹಿನ್ನೆಲೆ ಗಮನಿಸುವುದು ಉತ್ತಮ ಎಂದು ಹೇಳಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions