ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಉಡುಪಿ ಮತ್ತು ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಸಮಿತಿಯ ವತಿಯಿಂದ ಇಂದು ಹೂಡೆಯ ಬೀಚ್ ಹೀಲಿಂಗ್ ಸೆಂಟರ್ ನಲ್ಲಿ ಬಡ ಮುಸ್ಲಿಂ ಮಕ್ಕಳ ಮುಂಜಿ (ಸುನ್ನತ್) ಮಾಡಿಸುವ ಕಾರ್ಯಕ್ರಮ ನಡೆಯಿತು.
ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್ ಎನ್ ಓ ಉಡುಪಿ ತಾಲೂಕು ಅಧ್ಯಕ್ಷರಾದ ನಝೀರ್ ನೇಜಾರ್ ಕಿರಾತ್ ಪಠಿಸಿದರು.
ಬೀಚ್ ಹೀಲಿಂಗ್ ಸೆಂಟರ್ ಇಲ್ಲಿಯ ವೈದ್ಯರಾದ ಡಾ. ಮೊಹಮ್ಮದ್ ರಫೀಕ್ ರವರು ಮುಂಜಿ ಯಾನೆ ಸುನ್ನತ್ ಇದರ ಪ್ರಾಮುಖ್ಯತತೆ ಬಗ್ಗೆ ಇಸ್ಲಾಂನಲ್ಲಿ ಮತ್ತು ವೈಜ್ಞಾನಿಕ್ ವಾಗಿ ಅಗತ್ಯತೆ ಬಗ್ಗೆ ವಿವರಿಸಿದರು.
ಎನ್ ಎನ್ ಓ ಕಮ್ಯೂನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಝಫ್ರುಲ್ಲಾ ಟಿ ಎಂ. ಎನ್ ಎನ್ ಓ ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಬಗ್ಗೆ ಮತ್ತು ಯುವಕರಿಗೆ ಉದ್ಯೋಗದ ಬಗ್ಗೆ ಮಾರ್ಗದರ್ಶನ ನೀಡುತಾ ಮತ್ತು ಇಂತಹ ಹಲವು ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷ ದಿಂದ ಮಾಡುತ್ತಿರುವ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಎನ್ ಎನ್ ಓ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಫಾಝಿಲ್ ಆದಿಉಡುಪಿ, ಇಮ್ತಿಯಾಜ್ ಉದ್ಯಾವರ ಉಪಸ್ಥಿತರಿದ್ದರು. ಎನ್ ಎನ್ ಓ ಉಡುಪಿ ತಾಲೂಕು ಕಾರ್ಯದರ್ಶಿ ಸಾದಿಕ್ ಉಸ್ತಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಂತರ ಬಡ ಮುಸ್ಲಿಂ ಮಕ್ಕಳ ಮುಂಜಿ ಕಾರ್ಯಕ್ರಮ ನಡೆಯಿತು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions