ಆದಿದ್ರಾವಿಡ ಸಹಕಾರ ಸಂಘ ನಿಯಮಿತ, ತೆಂಕುಬಿರ್ತಿ ಇದರ 9 ನೇ ವಾರ್ಷಿಕ ಮಹಾಸಭೆಯು ಸೆ. 21ರಂದು ತೆಂಕುಬಿರ್ತಿ ಅಂಬೇಡ್ಕರ್ ಭವನ ದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಸುಧಾಕರ್ ಗುಜ್ಜರ್ ಬೆಟ್ಟು ಮಾತನಾಡಿ, ಸಂಘವು ಸತತವಾಗಿ ಒಂಭತ್ತು ವರ್ಷವೂ ಲಾಭ ಗಳಿಸುತ್ತ ಬಂದಿದೆ. ಸದಸ್ಯರು ಉಳಿತಾಯ ಮನೋಭಾವ ಹಾಗೂ ಸಾಲ ಮರುಪಾವತಿಯಲ್ಲಿ ಶಿಸ್ತು ಪಾಲನೆ ಮಾಡಿಕೊಂಡು ಬರಬೇಕು ಎಂದರು. ಸದಸ್ಯರು ಸಂಘದಲ್ಲಿ ಉತ್ತಮ ವ್ಯವಹಾರ ನಡೆಸುತ್ತ ಬಂದ್ದಿದ್ದು, ಸಂಘದ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ, ಉದ್ಯಮಿ ಎಸ್ ನಾರಾಯಣ್, ಚಿತ್ರಕಲಾ ಶಿಕ್ಷಕ ಹಾಗೂ ಕ್ರಿಕೆಟ್ ತರಬೇತುದಾರ ಲಿಂಗಪ್ಪ ಕುಟ್ಟಿ, ವಿಜ್ಞಾನ ಶಿಕ್ಷಕ ವರದರಾಜ್ ಬಿರ್ತಿ ಹಾಗೂ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಡಾ. ಶಶಿರಾಜ್ ಉಪ್ಪುರ್ ರವರನ್ನು ಸನ್ಮಾನಿಸಲಾಯಿತು. ಹಾಗೂ ಶೈಶಣಿಕ ಸಾಧನೆ ಮಾಡಿದ ಹಿತ ಎಲ್ ವಿ, ಹರ್ಷಿತ್ ಬಿರ್ತಿ, ಆರ್ಯ ಬಿ, ಸುಶಾಂತ್ ರಾಜ್ ಬಿರ್ತಿ, ಮಯೂರ್ ಮತ್ತು ಸುಶ್ಮಿತಾ ರಘು ಇವರನ್ನು ಗೌರವಿಸಲಾಯ್ತು.
ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಓಫ್ ಬರೋಡದ ಸುಬ್ರಮಣ್ಯ ಪ್ರಸಾದ್, ಭೋಜರಾಜ್ ಕೆ, ಸಂಪತ್ ರಾಜ್, ಹರಿಶ್ಚಂದ್ರ ಕೆ ಡಿ, ಶಿವಾನಂದ್ ಕೆ ಬಿರ್ತಿ ಹಾಗೂ ನಿರ್ದೇಶಕರುಗಳಾದ ವರ್ಣ ವಿಶ್ವನಾಥ್, ಜಗನ್ನಾಥ್ ಬಿರ್ತಿ, ಅರುಣಕುಮಾರ್ ಪಾಡಿಗಾರ್, ಶಂಕರ್ ಇಂದಿರಾನಗರ, ಶ್ರೀಮತಿ. ಗಂಗೆ, ಸುಮನಾ ಶ್ಯಾಮ್, ಚೈತನ್ಯ ಬಿರ್ತಿ, ಅನಿಲ್ ಕುಮಾರ್, ಪ್ರಶಾಂತ್ ಬಿರ್ತಿ, ಸಂದೇಶ್, ಸಂತೋಷ್ ಬಿರ್ತಿ ಹಾಗೂ ಸಿಬಂಧಿ ಪ್ರಶಾಂತ್, ಮಮತಾ ಉಪಸ್ಥಿತರಿದ್ದರು. ಶ್ಯಾಮರಾಜ್ ಬಿರ್ತಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಣಧಿಕಾರಿ ಗಣೇಶ್ ಬಿರ್ತಿ ವರದಿ ವಾಚಿಸಿದರು. ಆಂತರಿಕ ಲೆಕ್ಕಪರಿಶೋದಕ ಸುರೇಶ್ ಬಿರ್ತಿ ಬಜೆಟ್ ಹಾಗೂ ಲೆಕ್ಕಪತ್ರ ಮಂಡಿಸಿದರು. ಗಣೇಶ್ ಬಿರ್ತಿ ನಿರೂಪಿಸಿದರು, ಲಿಂಗಪ್ಪ ಕುಟ್ಟಿ ವಂದಿಸಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions