ಲಿಂಕ್ ಕಟ್ ಆಗಿ ಎಂಜಿನ್ ಹಾಗೂ ಬೋಗಿಗಳು ಬೇರ್ಪಟ್ಟ ಘಟನೆ ಬುಧವಾರ ಸಂಜೆ ಶಿವಮೊಗ್ಗದ ತುಂಗಾ ನದಿ ಬಳಿ ನಡೆದಿದೆ. ಲಿಂಕ್ ತಪ್ಪಿದ್ದ ಬೋಗಿಗಳು ತುಂಗಾ ನದಿ ಸೇತುವೆ ಮೇಲೆ ನಿಂತಿದ್ದು ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಅದೃಷ್ಟಾವಶತ್ ಯಾರಿಗೂ ತೊಂದರೆಯಾಗಿಲ್ಲ.
ತಾಳಗುಪ್ಪ - ಮೈಸೂರು ರೈಲು ತುಂಗಾ ನದಿ ಬರುತ್ತಿದ್ದಂತೆ ಬೋಗಿಗಳ ನಡುವೆ ಲಿಂಕ್ ಕಟ್ ಆಗಿದೆ. ಹಿಂದಿನ ಐದು ಬೋಗಿಗಳು ಲಿಂಕ್ ತಪ್ಪಿ ಎಂಜಿನ್ ಕೆಲವು ಮೀಟರ್ಗಳಷ್ಟು ಮುಂದೆ ಹೋಗಿತ್ತು. ಬೋಗಿ ಬೇರ್ಪಟ್ಟಿದ್ದು ತಿಳಿಯುತ್ತಿದ್ದಂತೆ ರೈಲು ನಿಲ್ಲಿಸಿದ್ದಾರೆ. ಮತ್ತೆ ವಾಪಾಸ್ ಬಂದು ಬೋಗಿಗಳನ್ನು ಜೋಡಿಸಿಕೊಂಡು ರೈಲು ಮುಂದೆ ಹೊರಟಿತು. ಇದರಿಂದ ರೈಲು 45 ನಿಮಿಷಗಳ ಕಾಲ ತಡವಾಗಿ ಚಲಿಸಿತು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions