Advertisement

ಕೆಸರು ಗದ್ದೆಯ ಅಬ್ಬರ, ಕೋಣಗಳ ಓಟದ ಸಂಭ್ರಮ!

ಇದು ಕೇವಲ ಕ್ರೀಡೆಯಲ್ಲ; ತುಳುನಾಡಿನ ಮಣ್ಣಿನ ಸಂಸ್ಕೃತಿ, ಪರಂಪರೆ ಮತ್ತು ಜನಸಾಮಾನ್ಯರ ಒಗ್ಗಟ್ಟಿನ ಜೀವಂತ ಪ್ರತಿಬಿಂಬ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಳ ತಾಲ್ಲೂಕಿನ ನರಿಂಗಾನ ಗ್ರಾಮದ ಮೋರ್ಲ–ಬೋಳದಲ್ಲಿ ನಡೆದ ನರಿಂಗಾನ ಲವ–ಕುಶ ಜೋಡುಕರೆ ಕಂಬಳ ಕಣ್ಮನ ಸೆಳೆಯಿತು.

ವೆಂಕಪ್ಪ ಕಾಜವರ ಅವರ ನಾಯಕತ್ವದಲ್ಲಿ ಊರಿನ ಜನರೆಲ್ಲರೂ ಒಂದಾಗಿ ಸಂಘಟಿಸಿದ ಈ ಕಂಬಳ, ಕರಾವಳಿ ಭಾಗದ ಸೊಗಡು ಹಾಗೂ ಸಂಸ್ಕೃತಿಯ ವೈಭವವನ್ನು ಎತ್ತಿಹಿಡಿದಿತು. ಕೆಸರಿನ ರಾಶಿಯಲ್ಲಿ ಕೋಣಗಳ ಹೆಜ್ಜೆಗಳ ಸದ್ದು ಪ್ರೇಕ್ಷಕರ ಕಿವಿಗೆ ಸಂಗೀತದಂತೆ ಆಹ್ಲಾದ ನೀಡಿತು.

ಕಂಬಳ ವೀಕ್ಷಣೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಎಸ್‌ಸಿಡಿಸಿಸಿ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಕಂಬಳದ ಮಹತ್ವವನ್ನು ಪ್ರಶಂಸಿಸಿದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions