ಯುನೈಟೆಡ್ ಎಂಪವರ್ ಮೆಂಟ್ ಅಸೋಸಿಯೇಷನ್ ವತಿಯಿಂದ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗಾಗಿ ರೂಪುಗೊಂಡಿರುವ ಸ್ಟಾರ್ ಬಾಯ್ಸ್ ಕಟಪಾಡಿ ಚಾಲೆಂಜರ್ಸ್ ಕಾಪು ತಂಡವನ್ನು ಕಾಪು ಉದ್ಯಮಿ ಯು.ಎ. ರಶೀದ್ ಕಾಪು ಅವರು ಖರೀದಿಸಿದ್ದಾರೆ. ಈ ತಂಡದ ಮೆಂಟರ್ ಆಗಿ ಅಬ್ದುಲ್ ಲತೀಫ್ ಶಿರ್ವ ಅವರನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರಿನ ಇಂಡಿಯಾನಾ ಕನ್ವೆಂಷನ್ ಸೆಂಟರ್ ಹಾಲ್ ನಲ್ಲಿ ನಡೆದ ಆಟಗಾರರ ಬಿಡ್ ಪ್ರಕ್ರಿಯೆಯಲ್ಲಿ ದೇಶದ ಹೆಸರಾಂತ ಯುವ ಕಬಡ್ಡಿ ಆಟಗಾರರಾದ ದಕ್ಷಿಣ ಕನ್ನಡ ಜಿಲ್ಲೆಯ ನಾಸೀರ್ ಅಮ್ಮಿ ಕುಪ್ಪಟ್ಟಿ ಅವರು ಕಾಪು ತಂಡದ ಪಾಲಾಗಿದ್ದಾರೆ. ಅವರೊಂದಿಗೆ ಇನ್ನೂ ಹಲವು ಪ್ರತಿಭಾವಂತ ಯುವ ಆಟಗಾರರು ಕಾಪು ತಂಡವನ್ನು ಪ್ರತಿನಿಧಿಸಲಿದ್ದು, ಈ ಬಾರಿ ತಂಡದಿಂದ ಶಕ್ತಿಶಾಲಿ ಪ್ರದರ್ಶನದ ನಿರೀಕ್ಷೆ ಮೂಡಿದೆ.
ಈ ಕುರಿತು ಮಾತನಾಡಿದ ಯುನೈಟೆಡ್ ಎಂಪವರ್ ಮೆಂಟ್ ಯಶೋಷಿಯೇಶನ್ ರಾಜ್ಯ ಸದಸ್ಯ ಶರ್ಫುದ್ದೀನ್ ಶೇಖ್ ಮಜೂರು “ಈ ಕ್ರೀಡಾಕೂಟವು ರಾಜ್ಯದ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯುತ್ತಮ ವೇದಿಕೆಯಾಗಲಿದೆ. ಕಬಡ್ಡಿಯ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ” ಎಂದು ತಿಳಿಸಿದರು.
ರಾಜ್ಯಮಟ್ಟದ ಈ ಕಬಡ್ಡಿ ಪಂದ್ಯಾವಳಿ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದ್ದು, ಕಾಪು ಚಾಲೆಂಜರ್ಸ್ ತಂಡದ ಮೇಲೆ ನಿರೀಕ್ಷೆಗಳು ಗಟ್ಟಿಯಾಗಿವೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲEditor Kannada Express 1st Floor, Raaj Towers Udupi - 576101
+919008424891
Kannadaexpress@gmail.com
© 2025 KannadaExpress. All Rights Reserved.
Design by GreyCrust Solutions