Advertisement

ಮೂಹಿಯುದ್ದಿನ್ ಜಾಮಿಯಾ ಮಸೀದಿ ಗಂಗಾವಳಿ ವಾರ್ಷಿಕೋತ್ಸವದ ಪೋಸ್ಟರ್ ಬಿಡುಗಡೆ

ಗಂಗಾವಳಿ: ಮೂಹಿಯುದ್ದಿನ್ ಜಾಮಿಯಾ ಮಸೀದಿ, ಗಂಗಾವಳಿಯಲ್ಲಿ ಪ್ರತಿವರ್ಷ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವ ಪಳ್ಳಿ ನೇರ್ಚೆ ವಾರ್ಷಿಕೋತ್ಸವವು ಈ ಬಾರಿ ಜನವರಿ 19, 2026 ರಿಂದ ಜನವರಿ 25, 2026ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಗೌರವಾಧ್ಯಕ್ಷರಾದ ಖುದುವಾತುಸ್ಸಾದಾತ್ ಆಸಯ್ಯದ್ ಮುಹಮ್ಮದ್ ಆಟಕೋಯ ತಂಗಳ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ವಾರ್ಷಿಕೋತ್ಸವಕ್ಕೆ ದೀನಿ ನೇತಾರರು, ಉಲಮಾ ಪಂಡಿತರು ಹಾಗೂ ಖ್ಯಾತ ಮತಪ್ರಭಾಷಣಕಾರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಜಾಲಾಲಿಯ್ಯ ರಾತಿಬ್, ಕುತಿಬಿಯ್ಯತ್ ಮೌಲಿದ್ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಾ. ಕೋಯಾ ಕಾಪಾಡ್ ಅವರ ವಿಶೇಷ ಕಾರ್ಯಕ್ರಮವೂ ಆಯೋಜಿಸಲಾಗಿದೆ.

ವಾರ್ಷಿಕೋತ್ಸವದ ಪೋಸ್ಟರ್ ಅನ್ನು ಇಂದು ಮೂಹಿಯುದ್ದಿನ್ ಜಾಮಿಯಾ ಮಸೀದಿಯ ಗೌರವಾಧ್ಯಕ್ಷರಾದ ಖುದುವಾತುಸ್ಸಾದಾತ್ ಆಸಯ್ಯದ್ ಮುಹಮ್ಮದ್ ಆಟಕೋಯ ತಂಗಳ್ ಅವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ನಜೀರ್ ಅಬ್ದುಲ್ ಖಾದರ್ ಸಾಹೇಬ್, ಕಮಿಟಿ ಸದಸ್ಯರಾದ ಹುಸೇನ್ ಎಂ. ಬಿಜಾಪುರ್, ಅಬ್ದುಲ್ ಅಝೀಜ್, ಸಿದ್ದಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಕೊನೆಯ ದಿನ ದುವಾ ಮಜ್ಲಿಸ್ ಹಾಗೂ ತಬರ್ರುಕ್ ವಿತರಣೆ ನಡೆಯಲಿದ್ದು, ಈ ಪವಿತ್ರ ಕಾರ್ಯಕ್ರಮದಲ್ಲಿ ಎಲ್ಲ ಭಕ್ತಾದಿಗಳು ಭಾಗವಹಿಸಬೇಕಾಗಿ ಮಸೀದಿ ಆಡಳಿತ ಕಮಿಟಿ ಆಹ್ವಾನ ನೀಡಿದೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions