Advertisement

ಕೊರಗ ಸಮುದಾಯವನ್ನು ಸಾಮಾಜಿಕವಾಗಿ ಸದೃಢಗೊಳಿಸಬೇಕು- ಬಸವಮೂರ್ತಿ ಶ್ರೀ

ಉಡುಪಿ: ಪ್ರಸ್ತುತ ಇರುವ ಸಮಾಜದಲ್ಲಿ ಅತ್ಯಂತ ಕಡು ಬಡತನದಿಂದ ಕೂಡಿರುವ ಕೊರಗ ಸಮುದಾಯವನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯವನ್ನು ಮಾಡಬೇಕಿದೆ. ಹಾಗಾದಾಗ ಮಾತ್ರವೇ ತಳ ಮಟ್ಟದ ಸಮುದಾಯ ಕೂಡ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಡಾ. ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕರೆ ನೀಡಿದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಡಾ. ಎಚ್.ಎಸ್. ಶೆಟ್ಟಿ ನೇತೃತ್ವದಲ್ಲಿ ಕುಂದಾಪುರ ತಾಲೂಕಿನ ಉಳ್ಳೂರು ಎಂಬಲ್ಲಿನ ಕೊರಗ ಸಮುದಾಯದ ೧೪ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಡಾ. ಎಚ್. ಎಸ್ .ಶೆಟ್ಟಿ ಅವರಲ್ಲಿ ಬಸವಾದಿ ಶರಣರ ವ್ಯಕ್ತಿತ್ವವೇ ಕಾಣುತ್ತದೆ. ಸ್ವಾತಂತ್ರ ನಂತರ ಭಾರತದಲ್ಲಿ ಶ್ರೀರಾಮ, ಶ್ರೀಕೃಷ್ಣ , ಕನಕದಾಸರ ಹೆಸರು ಹೇಳಿ ಭಾಷಣ ಮಾಡಿದವರು ಮಾತ್ರ ಇದ್ದರು. ಆದರೆ ತಳ ಮಟ್ಟದವರ ಪರವಾಗಿ ಮಾತನಾಡುವವರು ಯಾರೂ ಇರಲಿಲ್ಲ. ಆದ್ದರಿಂದಲೇ ಆ ತಳ ವರ್ಗದ ಸಮುದಾಯ ದ ಹಲವಾರು ಕುಟುಂಬಗಳು ಮತಾಂತರಕ್ಕೆ ತುತ್ತಾದವು. ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ಡಾ. ಎಚ್. ಎಸ್. ಶೆಟ್ಟಿ ಅವರಂತಹ ಉದಾತ್ತ ಚಿಂತನೆ ಉಳ್ಳವರು ಅಂದಿನ ಕಾಲದಲ್ಲೇ ಸಿಗುತ್ತಿದ್ದರೆ ತಳ ಮಟ್ಟದ ಸಮುದಾಯಗಳು ಮತಾಂತರವಾಗುತ್ತಿರಲಿಲ್ಲ ಎಂದು ತಿಳಿಸಿದರು. ಪ್ರಸ್ತುತ ಇಂತಹ ಉದಾತ್ತ ಚಿಂತನೆಯುಳ್ಳವರು ಸನಾತನ ಸಂಸ್ಕೃತಿಯಲ್ಲಿ ಇರುವುದರಿಂದ ಮುಂದಾಗುವ ಅನಾಹುತವನ್ನು ತಡೆಯಬಹುದಾಗಿದೆ. ಇವರಿಂದ ಪ್ರೇರಣೆ ಪಡೆದು ಮತ್ತಷ್ಟು ಜನರು ಕೊರಗ ಸಮುದಾಯ ಹಾಗೂ ಇತರ ಸಮುದಾಯಗಳಿಗೆ ಸಹಾಯ ಮಾಡುವ ಗುಣವನ್ನು ಹೊಂದುವಂತಾಗಲಿ ಎಂದು ಹಾರೈಸಿದರು. ನಿರಾಶ್ರಿತರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಅಂದಿದ್ದರೆ, ಕಲ್ಪಿಸಿಕೊಡಬೇಕು ಎಂದು ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ೧೯೭೦ ರಲ್ಲಿ ಮಾಡಿದ್ದರು.‌ ಹಾಗಾಗಿ ತಳ ವರ್ಗದ ಸಮುದಾಯಗಳು ನಿಮ್ಮ ಪರವಾಗಿ ಉಡುಪಿ ಪೇಜಾವರ ಮಠವಿದೆ ಎಂಬುದನ್ನು ಧೈರ್ಯವಾಗಿ ಹೇಳಿಕೊಳ್ಳಿ ಎಂದು ತಿಳಿಸಿದರು. ಇಂದಿನ ದಿನಮಾನಸದಲ್ಲಿ ಬಡವರು ತಮ್ಮ ಮನೆಯ ಬಳಿ ಇದ್ದರೆ ಅಗೌರವ ಎಂದು ಭಾವಿಸುವ ಶ್ರೀಮಂತರ ಮಧ್ಯದಲ್ಲಿ ಸ್ವಾಭಿಮಾನದಿಂದ ಬದುಕಲು ಮನೆ ನಿರ್ಮಿಸಿ ಕೊಟ್ಟಿರುವದು ಗೌರವದ ವಿಚಾರ ಎಂದು ಎಚ್.ಎಸ್. ಶೆಟ್ಟಿ ಅವರ ಕಾರ್ಯವನ್ನು ಶ್ಲಾಘಿಸಿದರು.

ಪೇಜಾವರ ಶ್ರೀ ವಿಶ್ವ ಪ್ರಸನ್ನ ಶ್ರೀಪಾದರು ಆಶೀರ್ವಚನ ನೀಡಿ, ಕಳೆದ ಎರಡು ವರ್ಷಗಳಲ್ಲಿ ಡಾ.ಎಚ್. ಎಸ್. ಶೆಟ್ಟಿ ಅವರು ೨೮ ಮನೆಗಳನ್ನು ನಿರ್ಮಿಸಿ ಕೊರಗ ಸಮುದಾಯಕ್ಕೆ ಕೊಟ್ಟಿದ್ದಾರೆ. ಇನ್ನು ೭೨ ಮನೆಗಳನ್ನು ನಿರ್ಮಿಸಿ ಕೊಡಲಿದ್ದಾರೆ. ಆಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಹಾಗೂ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆದಿದ್ದು, ಇನ್ನೇನಿದ್ದರೂ ರಾಮರಾಜ್ಯ ನಿರ್ಮಾಣ ಮಾಡುವ ಕೆಲಸ ಮಾತ್ರ ಬಾಕಿ ಇದೆ. ಆ ನಿಟ್ಟಿನಲ್ಲಿ ಇಂದು ಮನೆಗಳನ್ನು ನಿರ್ಮಿಸಿ ಕೊಡಲಾಗಿದ್ದು, ಇದು ಶ್ರೀರಾಮನಿಗೆ ಅರ್ಪಿತ ಎಂದರು.

ಮತಾಂತರ ಆಗಬಾರದು ಎಂಬುದೊಂದೇ ಷರತ್ತು

ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಪೇಜಾವರ ಶ್ರೀಗಳು, ನೀವು ರಾಮನ ಸೇವೆ ಮಾಡುವುದಾದರೆ ಕಡು ಬಡವನಿಗೆ ಮನೆ ಕಟ್ಟಿಕೊಡಿ ಎಂದು ಹೇಳಿದ ಏಕೈಕ ಮಾತಿಗೆ ಬದ್ದವಾಗಿ ಡಾ. ಎಚ್. ಎಸ್. ಶೆಟ್ಟಿ ಅವರು ೧೦೦ ಮನೆಗಳನ್ನು ಕೊರಗ ಸಮುದಾಯಕ್ಕೆ ಕಟ್ಟಿ ಕೊಡುವ ಭರವಸೆ ನೀಡಿದರು. ಅದರಲ್ಲಿ ೨೮ ಮನೆಗಳು ಸಾಕಾರಗೊಂಡಿವೆ. ಈ ಮನೆಗಳನ್ನು ಕಟ್ಟಿ ಕೊಡುವ ಸಂದರ್ಭದಲ್ಲಿ ಡಾ. ಶೆಟ್ಟಿ ಅವರು, ಯಾರೂ ಕೂಡ ಮತಾಂತರ ಆಗಬಾರದು ಎಂಬ ಏಕಮಾತ್ರ ಷರತ್ತು ವಿಧಿಸಿ ಕನಸಿನ ಮನೆ ಕಟ್ಟಿ ಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ನಿರ್ಧಾರಗಳು ನಮಗೆ ಮೇಲ್ಪಂಕಿ ಹಾಕಿ ಕೊಡುತ್ತವೆ ಎಂದರು‌.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions