Advertisement

ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಕೆ ಅಬ್ದುಲ್ ಜಬ್ಬಾರ್ ನಾಳೆ ಉಡುಪಿಗೆ

ಕೆ.ಪಿ.ಸಿ.ಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾದಕ್ಷರು, ಮಾನ್ಯ ವಿಧಾನ ಪರಿಷತ್ತ್ ನ ಸದಸ್ಯರೂ ಆದ ಜನಾಬ್ ಕೆ. ಅಬ್ದುಲ್ ಜಬ್ಬಾರ್ ಸಾಹೇಬರು ನಾಳೆ ಆಗಸ್ಟ್ 23ರ ಶನಿವಾರದಂದು ಪೂರ್ವಾಹ್ನ 11.00 ಗಂಟೆಗೆ ಬಾಸೆಲ್ ಮಿಶನರೀಸ್ ಮೆಮೋರಿಯಲ್ ಅಡಿಟೋರಿಯಮ್ ( ಮಿನಿ ಹಾಲ್) ಮಿಶನ್ ಕೌಂಪೌಡ್ ಉಡುಪಿ. ಇಲ್ಲಿ ಜರುಗಲಿರುವ ಕಾರ್ಯಕರ್ತರ ಮತ್ತು ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಅವರ ಜೊತೆಗೆ ಕೆ.ಪಿ.ಸಿ.ಸಿ ವಕ್ತಾರರಾದ ಜನಾಬ್ ಅಬ್ದುಲ್ ಮುನೀರ್ ಜಲ್ಸಾಲೆ , ಮುಖಂಡರಾದ ಸಿರಾಜ್ ಅಹಮ್ಮದ್ ರವರು ಆಗಮಿಸಲಿಕ್ಕಿದ್ದಾರೆ. ಸಭೆಯಲ್ಲಿ, ಮಾಜಿ ಸಚಿವರು ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ. ವಿನಯ್ ಕುಮಾರ್ ಸೊರಕೆ, ಮಾಜಿ ಸಂಸದರಾದ ಶ್ರೀ. ಜಯಪ್ರಕಾಶ್ ಹೆಗ್ಜೆ, ಮಾಜಿ ಶಾಸಕರಾದ ಶ್ರೀ ಗೋಪಾಲ್ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು,,ಎಂ ಎ ಗಫೂರ್,ಕಿಶನ್ ಹೆಗ್ಡೆ,ಶ್ರೀ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಶ್ರೀ ಪ್ರಸಾದ್ ಕಾಂಚನ್, ಶ್ರೀ ದಿನೇಶ್ ಹೆಗ್ಡೆ ಮೊಳಹಳ್ಳಿ, ಮುಖ್ಯ ಅತಿಥಿಗಳಾಗಿ ಹಾಗೂ ಅಲ್ಪಸಂಖ್ಯಾತರ ಘಟಕದ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಜಿಲ್ಲೆಯ ಪದಾಧಿಕಾರಿಗಳು ಮತ್ತು ಅಲ್ಪಸಂಖ್ಯಾತ ಸಮುಧಾಯದ ಮುಖಂಡರುಗಳು, ಪಕ್ಷದ ಹಿರಿಯ ನಾಯಕರುಗಳು ಭಾಗವಹಿಸಲಿದ್ದಾರೆ.

ಈ ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಎಲ್ಲಾ ನಾಯಕರು, ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳು ಹೆಚ್ಚಿನ ಸಂಖೈಯಲ್ಲಿ ಭಾಗವಹಿಸಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರ್ಹಬಾ ಯಾ ಶಹ್ ರ ರಬೀಅ್ ಕಾರ್ಯಕ್ರಮದಲ್ಲೂ ಭಾಗಿ

ಮಲ್ಲಾರು - ಮಜೂರು ಬದ್ರಿಯಾ ಜುಮುಅ ಮಸ್ಜಿದ್ ಆಶ್ರಯದಲ್ಲಿ ನಡೆಯುವ ಮರ್ಹಬಾ ಯಾ ಶಹ್ರ ರಬೀಅ್ ಮತ್ತು ಸ್ವಲಾತ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions