Advertisement

ಮಾಧ್ಯಮದವರಿಗೆ ಮತ್ತು ನಾಗರಿಕೆ ಸೂಕ್ತ ರಕ್ಷಣೆ ನೀಡಬೇಕಾದ್ದು ಸರಕಾರದ ಕರ್ತವ್ಯ - ಬಿ.ಎಂ‌.ಭಟ್

ಮಾದ್ಯಮದವರ ಮೇಲೆ ಧರ್ಮಸ್ಥಳದಲ್ಲಿ ನಡೆದ ದಾಳಿ ಖಂಡನೀಯ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಹೇಳಿದ್ದಾರೆ.

ಅವರು ನಿನ್ನೆ ಧರ್ಮಸ್ಥಳದಲ್ಲಿ ಮಾದ್ಯಮ ವರದಿಗಾರರ ಮೇಲೆ ಕೆಲವು ದುಷ್ಕರ್ಮಿಗಳು ನಡೆಸಿದ ಹಲ್ಲೆ ಯಿಂದ ಹಲ್ಲೆಗೊಳಗಾದ ಕುಡ್ಲ‌ ರಾಂಪೇಜಿನ ಅಜೇಯ್ ಅಂಚನ್, ಸಂಚಾರಿ ಸ್ಟುಡಿಯೋದ ವಿಜಯ್, ಯುನೈಟೆಡ್ ಮೀಡಿಯಾದ ಅಭಿಷೇಕ್, ಕುಡ್ಲ ರಾಂಪೇಜಿನ‌ ಕ್ಯಾಮಾರಾ ಮೇನ್ ಅವರನ್ನು ಇಂದು ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಬೇಟಿ ಮಾಡಿ ಆರೋಗ್ಯ ವಿಚಾರಿಸಿ, ಹಲ್ಲೆಯನ್ನು ಖಂಡಿಸಿ ಈ ಹೇಳಿಕೆ ನೀಡಿದರು.

ಸಂವಿಧಾನದ 4 ನೇ ಸ್ತಂಬದಂತಿರುವ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಹಲ್ಲೆಕೋರರನ್ನು ತಕ್ಷಣ ಬಂಧಿಸಿ ಪ್ರಕರಣ ದಾಖಲಿಸಬೇಕು. ಮಾದ್ಯಮದವರ ವರದಿಯನ್ನೇ ಸಹಿಸದ ಈ ಹಲ್ಲೆಕೋರರ ಮೇಲೆ ಎಸ್.ಐ.ಟಿ. ತನಿಖೆ ನಡೆಸಬೇಕು ಎಂದರು. ಅತ್ಯಾಚಾರಗಳು, ಕೊಲೆಗಳು ನಡೆದದ್ದಕ್ಕೆ ಕಾರಣಗಳು ಗೊತ್ತಾಗುವ ಮೂಲಕ ಕ್ಷೇತ್ರಕ್ಕೆ ಅಂಟಿರುವ ಕಪ್ಪು ಚುಕ್ಕೆ ತೊಳೆದು ಹೋಗಲಿ ಎಂಬುದೇ ಎಲ್ಲರ ಅಭಿಲಾ಼ಷೆ ಎಂದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Udupi

9985974521

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions