ಮಲ್ಪೆ: ಇಲ್ಲಿನ ಕಡಲತೀರದ ಬೀಚ್ ರಿಕ್ಷಾ ಚಾಲಕ ಮಾಲಕ ಸಂಘದಿಂದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರರಾದ ಜಯನ್ ಮಲ್ಪೆಗೆ ರಾಜ್ಯ ಸರಕಾರ ಡಾ.ಬಾಬು ಜಗಜೀವನ ರಾಂ ಪ್ರಶಸ್ತಿ ನೀಡಿದ ಹಿನ್ನಲೆಯಲ್ಲಿ
ಸನ್ಮಾನಿಸಲಾಯಿತು. ಬೀಚ್ ರಿಕ್ಷಾ ಚಾಲಕರ ಮಾಲಕರ ಸಂಘ ಆಯೋಜಿಸಿದ ನೂತನ ಧ್ವಜಸ್ತಂಭ ಉದ್ಘಾಟನೆ ಮತ್ತು 79ನೇ ಧ್ವಜಾರೋಹಣ ಸಮಾರಂಭದಲ್ಲಿ ಜಯನ್ ಮಲ್ಪೆಯವರ ಜಾತಿ ಮತ ಬೇದವಿಲ್ಲದೆ ನೊಂದವರ ಸಮಾಜ
ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ ಸುವರ್ಣ, ನಗರಸಭೆಯ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮಿ, ಮಾಜಿ ಸದಸ್ಯ ಪಾಂಡುರಂಗ ಮಲ್ಪೆ, ಸಮಾಜಸೇವಕ ಮಂಜು ಕೊಳ, ಹಿಂದು ಯುವಸೇನೆಯ ಜಿಲ್ಲಾಧ್ಯಕ್ಷ ಅಜೀತ್
ಕೊಡವೂರು, ರಂಜಿತ್ ಶೆಟ್ಟಿ, ಪ್ರಕಾಶ್ ಎಂ ಕಲ್ಮಾಡಿ ಮುಂತಾದವರು ಉಪಸ್ಥಿತರಿದ್ದರು. ಭರಾಗ್ ಮಲ್ಪೆ ಸ್ವಾಗತಿಸಿದರು, ರವಿ ಅಮೀನ್ ಧನ್ಯವಾದ ನೀಡಿದರು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions