Advertisement

ಉಡುಪಿ ಪರ್ಯಾಯಕ್ಕೆ ಧಾನ್ಯಾಭರಣ ಕೃಷ್ಣನ ಸ್ವಾಗತ

ಪರ್ಯಾಯ ಮಹೋತ್ಸವದ ಆಕರ್ಷಣೆಯ ಅಂಗವಾಗಿ ಉಡುಪಿಯ ಆಭರಣ ಜ್ಯುವೇಲ್ಲರಿಯ ಆವರಣದಲ್ಲಿ ಒಂದು ವಿಶಿಷ್ಟ ಕೃಷ್ಣ ನ ಕಲಾಕೃತಿಯನ್ನು ಆರ್ಟಿಸ್ಟ್ಸ್ ಫೋರೊಂ ನ

ಕಲಾವಿದರಾದ ಶ್ರೀನಾಥ್ ಮಣಿಪಾಲ್ ವಿವಿಧ ಬಗೆಯ ಧಾನ್ಯ ಕಾಳುಗಳನ್ನು ಬಳಸಿ ರಚಿಸಿದ್ದಾರೆ.

ಈ ಕಲಾಕೃತಿಯನ್ನು ರಚಿಸಲು ಸುಮಾರು 20 ಕೆ ಜಿ ಧಾನ್ಯಗಳನ್ನು ಬಳಸಿದ್ದಾರೆ. ಈ ಕಲಾಕೃತಿಯು 9 ಅಡಿ ಎತ್ತರವಿದೆ.

ಕಲಾಕೃತಿಯನ್ನು ರಚಿಸಲು ಬಟಾಣಿ, ಹುರಿಕಡಲೆ, ಉದ್ದು ತೊಗರಿ ಹೆಸರು ಕಾಳು, ಅವರೆಕಾಳು, ರಾಜ್ಮಕಾಳು, ತಿಂಗಳಾವರೆ, ಮುಂತಾದ ಕಾಳುಗಳನ್ನು ವರ್ಣ ಸಂಯೋಜನೆಗೆ ಅನುಸಾರವಾಗಿ ಜೋಡಿಸಿದ್ದಾರೆ. ಇನ್ನೋರ್ವಕಲಾವಿದ ರವಿ ಹಿರೆಬೆಟ್ಟು ಈ ಕಲಾಕೃತಿಯನ್ನು ರಚಿಸಲು ಸಹಕರಿಸಿದ್ದಾರೆ.ಈ ಮುದ್ದಾದ ಕೃಷ್ಣನ ಕಲಾಕೃತಿಯು ಉಡುಪಿಗೆ ಆಗಮಿಸುವ ಲಕ್ಷಾಂತರ ಪ್ರವಾಸಿಗರನ್ನು ಈಗಾಗಲೇ ತನ್ನತ್ತ ಸೆಳೆಯುತ್ತಿದೆ.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions