ಕುಂದಾಪುರ | ಜಮ್ಮಿಯತುಲ್ ಫಲಾಹ್ ಕುಂದಾಪುರ ತಾಲೂಕು ಅಧ್ಯಕ್ಷರಾಗಿ ಅಬು ಮೊಹಮ್ಮದ್ ಮುಜಾವರ್ ಆಯ್ಕೆ ಮಾಡಲಾಗಿದೆ.
ಇಂದು ಕುಂದಾಪುರದ ಜಮ್ಮಿಯತುಲ್ ಫಲಾಹ್ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಸಂಸ್ಥೆಯ ಗೌರವಾನ್ವಿತ ಸದಸ್ಯರಾದ ಅಬು ಮೊಹಮ್ಮದ್ ಮುಜಾವರ್, ಈ ನಾಯಕತ್ವಕ್ಕೆ ಸೂಕ್ತ ಆಯ್ಕೆಯಾಗಿದ್ದು ವಿಶಾಲ ಅನುಭವ ಹೊಂದಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮತ್ತು ಸಮುದಾಯದ ಅಭಿವೃದ್ಧಿಗೆ ಅವರ ಬದ್ಧತೆ, ಪ್ರದೇಶದಲ್ಲಿ ಒಗ್ಗಟ್ಟು, ಕಲ್ಯಾಣ ಮತ್ತು ಪ್ರಗತಿಯನ್ನು ಉತ್ತೇಜಿಸುವ ಜಮ್ಮಿಯತುಲ್ ಫಲಾಹನ ಧೈಯದೊಂದಿಗೆ ಹೊಂದಿಕೆಯಾಗುತ್ತದೆ.
ಸಭೆಯ ಸಂದರ್ಭದಲ್ಲಿ, ಕುಂದಾಪುರ ತಾಲೂಕು ಘಟಕಕ್ಕೆ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು, ಸಮುದಾಯ ಸೇವೆ ಮತ್ತು ಅಭಿವೃದ್ಧಿಯಲ್ಲಿ ಸಂಸ್ಥೆಯ ಪ್ರಯತ್ನಗಳನ್ನು ಬಲಪಡಿಸುವ ಗುರಿಯೊಂದಿಗೆ ಪ್ರಮುಖ ನೇಮಕಾತಿಗಳು ನಡೆದವು.
ಸಭೆಯಲ್ಲಿ ಕುರಾನ್ ಪಠಣ, ಪರಿಚಯ ಭಾಷಣ, ದೈವಾರ್ಷಿಕ ವರದಿ ಮತ್ತು ಆರ್ಥಿಕ ಅವಲೋಕನವನ್ನು ಒಳಗೊಂಡಿತ್ತು. ಇದು ಸಂಸ್ಥೆಯ ಪಾರದರ್ಶಕ ಮತ್ತು ಸಮಗ್ರ ವಿಧಾನವನ್ನು ಪ್ರತಿಬಿಂಬಿಸುತ್ತದೆ. “ಅಬು ಮೊಹಮ್ಮದ್ ಮುಜಾವರ್ ಅವರ ನಾಯಕತ್ವದಲ್ಲಿ, ಜಮ್ಮಿಯತುಲ್ ಫಲಾಹ್ ಕುಂದಾಪುರ ತಾಲೂಕು ಮುಂದುವರಿಯುದು ನಮ್ಮ ಸಮುದಾಯದಲ್ಲಿ ಅರ್ಥಪೂರ್ಣ ಪರಿಣಾಮವನ್ನು ಬೀರುವುದು ಎಂದು ನಾವು ವಿಶ್ವಾಸ ಹೊಂದಿದ್ದೇವೆ,” ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
“ಅವರ ದೃಷ್ಟಿಕೋನ ಮತ್ತು ಸಮರ್ಪಣೆಯು ಮುಂದಿನ ಎರಡು ವರ್ಷಗಳಲ್ಲಿ ಶಿಕ್ಷಣ, ಸಾಮಾಜಿಕ ಸಾಮರಸ್ಯ ಮತ್ತು ಕಲ್ಯಾಣ ಕಾರ್ಯಕ್ರಮ ಉತ್ತೇಜಿಸುವಲ್ಲಿ ನಮಗೆ ಮಾರ್ಗದರ್ಶನ ನೀಡಲಿದೆ.” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions